ಗಣಿತ ದಿನ ಆಚರಣೆಯಂದು ಶಾಲೆಗಳಲ್ಲಿ ಶಿಬಿರಗಳ ಮೂಲಕ ಗಣಿತ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಆಯೋಜಿಸಬೇಕು. ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ನಮ್ಮದೇ ದೇಶದ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸಬೇಕು. ಜತೆಗೆ ಯುವ ಪೀಳಿಗೆಯಲ್ಲಿ ಸ್ವಯಂ ಕಲಿಕೆ ಮತ್ತು ತಾರ್ಕಿಕ ಕೌಶಲಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವ ಮೂಲಕ ಈ ದಿನವನ್ನು ಮಹತ್ವದ್ದಾಗಿಸಬೇಕು.