ನಂಜನಗೂಡಿನ ರಥ ಬೀದಿಯ ನಿವಾಸಿಯೊಬ್ಬರು ಇತ್ತೀಚೆಗೆ ನಿಧನರಾದ್ದರಿಂದ, ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕಳೆದ ಗುರುವಾರ ಹಾಗೂ ಶುಕ್ರವಾರ ಯಾವುದೇ ರೀತಿಯ ಪೂಜೆ- ಪುನಸ್ಕಾರ ನಡೆಯಲಿಲ್ಲ. ಇದೇ ರೀತಿಯ ಸಂಪ್ರದಾಯವು ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟ ಹಾಗೂ ರಾಜ್ಯದ ಇನ್ನೂ ಹಲವು ದೇವಸ್ಥಾನಗಳಲ್ಲಿ ಚಾಲ್ತಿಯಲ್ಲಿದೆ.