ನಂಜನಗೂಡಿನ ರಥ ಬೀದಿಯ ನಿವಾಸಿಯೊಬ್ಬರು ಇತ್ತೀಚೆಗೆ ನಿಧನರಾದ್ದರಿಂದ, ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕಳೆದ ಗುರುವಾರ ಹಾಗೂ ಶುಕ್ರವಾರ ಯಾವುದೇ ರೀತಿಯ ಪೂಜೆ- ಪುನಸ್ಕಾರ ನಡೆಯಲಿಲ್ಲ. ಇದೇ ರೀತಿಯ ಸಂಪ್ರದಾಯವು ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟ ಹಾಗೂ ರಾಜ್ಯದ ಇನ್ನೂ ಹಲವು ದೇವಸ್ಥಾನಗಳಲ್ಲಿ ಚಾಲ್ತಿಯಲ್ಲಿದೆ.
ಸಕಲ ಚರಾಚರಗಳಿಗೂ ಮೂಲ ಸ್ವರೂಪನೂ, ಸಕಲ ಗ್ರಹಬಲ ಸರಸಿಜಾಕ್ಷನೂ,ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೂ ಆದ ಆ ಪರಮಾತ್ಮನಿಗೆ ಮಡಿಯೇ? ಮೈಲಿಗೆಯೇ? ನಿಜಕ್ಕೂ ಅಚ್ಚರಿಯಾಗುತ್ತದೆ.
ಕೆ.ವಿ.ವಾಸು,ಮೈಸೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.