ಬಡ ರೈತರು, ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿದ್ದ ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ಯೋಜನೆ ನಾಲ್ಕು ವರ್ಷಗಳ ಹಿಂದೆ ರದ್ದಾಗಿದ್ದು, ಅದನ್ನು ಇದೀಗ ಜನವರಿ 1ರಿಂದ ಪುನರಾರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆ ಕಳೆದ ಬಾರಿ ರಾಜ್ಯದ 43 ಲಕ್ಷ ಸದಸ್ಯರನ್ನು ಹೊಂದಿತ್ತಾದರೂ ಖಾಸಗಿ ಆಸ್ಪತ್ರೆ ಹಾಗೂ ಕೆಲ ಅಧಿಕಾರಿಗಳ ಹೊಂದಾಣಿಕೆಯ ಮೂಲಕ ಹಳ್ಳ ಹಿಡಿದಿತ್ತು. ಈಗಲೂ ಈ ಯೋಜನೆ ನಾಮಕಾವಸ್ತೆ ಆಗದೆ ಸರ್ಕಾರವು ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕಿ ಆಯಾ ಚಿಕಿತ್ಸೆಗೆ ನಿರ್ದಿಷ್ಟ ದರ ನಿಗದಿಗೊಳಿಸಬೇಕು.