ಬೀದರ್ ಜಿಲ್ಲೆಯ ಮೆಹಕರ ಗ್ರಾಮದಲ್ಲಿ ಹಿಂದೆ ಪ್ರತಿಮೆಗಳ ಹೆಸರಿನಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ತಪ್ಪಿಸಲು, ಅಲ್ಲಿದ್ದ 22 ಪ್ರತಿಮೆಗಳನ್ನು ತೆಗೆಸಲು ಶ್ರಮಿಸಿದ ಮೆಹಕರ ಮಠದ ಶ್ರೀಗಳ ಕಾರ್ಯ ಪ್ರಶಂಸನೀಯವಾದುದು. ಇತ್ತೀಚೆಗೆ ಸಣ್ಣ ಸಣ್ಣ ಹಳ್ಳಿಗಳಲ್ಲೂ ಸ್ಥಾಪನೆಗೊಳ್ಳುತ್ತಿರುವ ಹತ್ತಾರು ಪ್ರತಿಮೆಗಳು, ಜಾತಿ ಮತ್ತು ಧರ್ಮ ಸಂಘರ್ಷಗಳಿಗೆ ಕಾರಣವಾಗಿ, ಹಳ್ಳಿಯ ಸಾಮರಸ್ಯದ ಬದುಕಿಗೆ ಧಕ್ಕೆ ತರುತ್ತಿವೆ. ಜೊತೆಗೆ, ಜಾತಿಯ ನೆಲೆಯಲ್ಲಿ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ, ಅವರ ಆದರ್ಶ, ನಂಬಿಕೆ ಹಾಗೂ ತಾತ್ವಿಕ ನೆಲೆಗಟ್ಟುಗಳನ್ನೇ ನೆಲಸಮ ಮಾಡುವ ಪ್ರಯತ್ನ ಕಳವಳಕಾರಿ.