ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಅವರಿಂದ ಇಂತಹ ಪ್ರತಿಕ್ರಿಯೆ ಸಹಜ ಮತ್ತು ಸಾಮಾನ್ಯ. ಆದರೆ, ಹೊಗೇನಕಲ್ ಬಳಿ ಕುಡಿಯುವ ನೀರಿಗೆಂದು ತಮಿಳುನಾಡು ನಿರ್ಮಿಸಿಕೊಂಡ ಅಣೆಕಟ್ಟು ಈಗ ನೀರಾವರಿ ಉದ್ದೇಶಕ್ಕೂ ಬಳಕೆ ಆಗುತ್ತಿದೆ. ಅದಕ್ಕೆ ನಾವು ತಗಾದೆ ತೆಗೆದಿಲ್ಲ. ಈ ವಿಷಯವನ್ನು ನಮ್ಮ ನೀರಾವರಿ ತಜ್ಞರಾಗಲೀ ಕಾನೂನು ತಜ್ಞರಾಗಲೀತಮಿಳುನಾಡಿಗೆ ಏಕೆ ಮನವರಿಕೆ ಮಾಡಿಕೊಡುತ್ತಿಲ್ಲ?