ಆ ಶಿಕ್ಷೆಯೆಂದರೆ, ಆತನ ಕುಟುಂಬದ ಜೀವನಾಧಾರವಾಗಿದ್ದ ನಾಲ್ಕು ಚಕ್ರದ ತಳ್ಳುಗಾಡಿಯನ್ನು ಸ್ಥಳೀಯ ಆಡಳಿತಾಧಿಕಾರಿಗಳು ಎಲ್ಲರ ಎದುರು ಸುತ್ತಿಗೆಯಿಂದ ಹೊಡೆದು ಚೂರು ಚೂರು ಮಾಡಿದರು. ಆ ಸಂದರ್ಭದಲ್ಲಿ ಆ ನಿಸ್ಸಹಾಯಕ ಬಡ ವ್ಯಾಪಾರಿಯು ‘ಸಾರ್, ಸಾರ್ ಇನ್ನೊಮ್ಮೆ ತಪ್ಪು ಮಾಡೋದಿಲ್ಲ. ನನ್ನ ಗಾಡಿ ಬಿಟ್ಟುಬಿಡಿ’ ಎಂದು ಅಳುತ್ತಾ ಅಂಗಲಾಚಿ ಬೇಡಿದರೂ ಕಿಂಚಿತ್ತೂ ಕರುಣೆ ತೋರಿಸಲಿಲ್ಲ.