ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಹಲ್ಲೆ: ಕಠಿಣ ಶಿಕ್ಷೆಯಾಗಲಿ

Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ಜಾರ್ಖಂಡ್‍ನ ಗ್ರಾಮವೊಂದರಲ್ಲಿ ಗುಂಪೊಂದು ತಬ್ರೇಜ್ ಅನ್ಸಾರಿ ಎಂಬ ಯುವಕನ ಮೇಲೆ ಬೈಕ್ ಕಳವು ಮಾಡಿದ ಗುಮಾನಿ ಮೇಲೆ ಹಲ್ಲೆ ನಡೆಸಿರುವುದು, ಬಳಿಕ ಆತ ಸಾವನ್ನಪ್ಪಿರುವ ಘಟನೆ ಆತಂಕಕಾರಿಯಾಗಿದೆ(ಪ್ರ.ವಾ., ಜೂನ್ 25). ಧಾರ್ಮಿಕ ಉನ್ಮಾದದಿಂದ ಕೂಡಿದ ಈ ಗುಂಪು ‘ಜೈ ಶ್ರೀರಾಮ್’, ‘ಜೈ ಹನುಮಾನ್’ ಎಂದು ಘೋಷಣೆ ಕೂಗುವಂತೆ ಆತನನ್ನು ಒತ್ತಾಯಿಸಿರುವುದು ಖಂಡನೀಯ. ನಿಜವಾಗಿಯೂ ಆತ ಬೈಕ್ ಕಳವು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಆತನನ್ನು ಪೊಲೀಸರಿಗೆ ಒಪ್ಪಿಸಬಹುದಿತ್ತು. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರವನ್ನು ಇವರಿಗೆ ಕೊಟ್ಟವರಾರು? ಈ ಕೃತ್ಯದ ಮೂಲಕ ಸಮಾಜದಲ್ಲಿ ಭಯದ ವಾತಾವರಣ ವನ್ನು ಸೃಷ್ಟಿಸುವುದು ಈ ಗುಂಪಿನ ದುರುದ್ದೇಶ ಆಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇಂತಹ ವಿಕೃತ ಮನಸ್ಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

– ಹುಲಿಕಟ್ಟಿ ಚನ್ನಬಸಪ್ಪ,ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT