ಈ ವರದಿಯನ್ನು ನೋಡಿದಾಕ್ಷಣ, ಹಲವು ಬಗೆಯ ನೈಸರ್ಗಿಕ ಏರುಪೇರುಗಳಿಗೆ ತಮ್ಮನ್ನು ಒಡ್ಡಿಕೊಂಡೂ ತಮ್ಮ ಅಚಲ ಭದ್ರತೆ, ಮನೋಜ್ಞ ಕಲಾತ್ಮಕತೆಯನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡು ಶತಮಾನಗಳಿಂದ ಜಗತ್ತಿನ ಮನೆಮಾತಾಗಿರುವ ವಾಸ್ತುಶಿಲ್ಪ, ಶಿಲ್ಪಕಲಾ ವೈಭವದ ನಾಡಿನವರಾ ನಾವು ಎಂದು ಯೋಚಿಸುವಂತಾಯಿತು. ಕಳಪೆ ಕಾಮಗಾರಿಯಿಂದ ಆಗಿರುವ ನಷ್ಟ, ಅಸಮರ್ಪಕ ಲೆಕ್ಕಗಳಿಗೆ ಪಾವತಿಸಿರಬಹುದಾದ ಹೆಚ್ಚುವರಿ ಹಣವನ್ನು ಹೇಗಾದರೂ ವಸೂಲಿ ಮಾಡಬಹುದು. ಆದರೆ, ಆಧುನಿಕ ಯುಗದ ಹೊಸ ಆವಿಷ್ಕಾರ, ತಾಂತ್ರಿಕ ನೈಪುಣ್ಯವನ್ನು ನಿರ್ಲಕ್ಷಿಸಿ ನಾಡಿಗೆ ಮಾಡಿರುವ ದ್ರೋಹವನ್ನು ಹೇಗೆ ಅಲಕ್ಷಿಸುವುದು? ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರು ಹೊಣೆಗಾರರು...?!