ಅದು ನಿವೇಶನ ಮಾರಿದ್ದರಿಂದ ಬಂದ ಹಣ ಎಂಬ ಅಪ್ಪಾಜಿಗೌಡರ ಹೇಳಿಕೆ ಹಾಸ್ಯಾಸ್ಪದ ಎನಿಸುತ್ತದೆ. ಈಗಿನ ಆನ್ಲೈನ್ ಯುಗದಲ್ಲಿ ಕೋಟಿಗಟ್ಟಲೆ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವುದು ಎಷ್ಟು ಸರಿ? ಅದೂ ಚುನಾವಣಾ ಸಮಯದಲ್ಲಿ. ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗಬೇಕಾದ ಹಣವನ್ನು ಕಾರಿನ ಸ್ಟೆಪ್ನಿಯಲ್ಲಿ ಸಾಗಿಸಿದ್ದೇಕೆ ಎಂಬುದರ ಹಿನ್ನೆಲೆ ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವಿಚಾರ ತಿಳಿದಾಕ್ಷಣ ಚುರುಕಿನ ಕಾರ್ಯಾಚರಣೆ ನಡೆಸಿದ ಐ.ಟಿ. ಅಧಿಕಾರಿಗಳ ಕಾರ್ಯ ಪ್ರಶಂಸನೀಯ.