ನಗರ, ಪಟ್ಟಣಗಳ ಜನರು ಮಾಡಿದ ಹೊಲಸನ್ನು ತಮ್ಮ ಕೈಗಳಿಂದ ವಿಲೇವಾರಿ ಮಾಡಿ ನೈರ್ಮಲ್ಯಕ್ಕೆ ಕೊಡುಗೆ ನೀಡುವ ಪೌರಕಾರ್ಮಿಕರಿಗೆ ನಮ್ಮ ಸಮಾಜ ಎಷ್ಟರಮಟ್ಟಿಗೆ ಬೆಲೆ ಕೊಡುತ್ತದೆ ಎಂಬುದು ಬೇರೆ ಮಾತು. ಇಲ್ಲಿ ಚಿನ್ನಕ್ಕೆ ಇರುವ ಬೆಲೆಗಿಂತ ಮಹಿಳೆಯ ಪ್ರಾಮಾಣಿಕತೆಯ ತೂಕವೇ ಹೆಚ್ಚಾಗಿದೆ. ಬೇಡುವವ ಬಡವ, ಸಾಕೆಂದವನೇ ಶ್ರೀಮಂತ ಎನ್ನುವ ಶರಣರ ವಚನದಂತೆ ನಿಜಕ್ಕೂ ಆ ಮಹಿಳೆಯೇ ಅಪ್ಪಟ ಚಿನ್ನ ಎನ್ನಲು ಅಡ್ಡಿ ಇಲ್ಲ ಅಲ್ಲವೆ.