‘ಗಾಜು ಒಡೆಯುವ ಮುನ್ನ...’ ಎಂಬ ಡಾ. ಮುರಳೀಧರ ಕಿರಣಕೆರೆ ಅವರ ಲೇಖನ (ಸಂಗತ, ಅ. 19) ಅರ್ಥಪೂರ್ಣ. ಇಂದಿನ ಯುವಕರ ಮನಸ್ಸು ಅದೆಷ್ಟು ಹದಗೆಟ್ಟಿದೆಯೆಂದರೆ, ತಾವು ಕುಡಿದ ಮದ್ಯದ ಖಾಲಿ ಬಾಟಲಿಗಳನ್ನು ಹಾಗೇ ಬಿಸಾಡದೆ ಅದನ್ನು ಒಡೆದು ಚೂರು ಚೂರು ಮಾಡಿ ಜನ ಓಡಾಡುವ ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ.