‘ದೋಸೆ ಚಪ್ಪರಿಸುವುದರಲ್ಲಿ ತಪ್ಪೇನಿದೆ?’ ಎಂದು ಬಿ.ಎಸ್.ಭಗವಾನ್ ಅವರು ಕೇಳಿರುವುದು (ವಾ.ವಾ.. ಸೆ. 12) ಹಾಸ್ಯಾಸ್ಪದವಷ್ಟೇ ಅಲ್ಲ ತೀರಾ ಬಾಲಿಶವಾಗಿಯೂ ಇದೆ. ತಪ್ಪಿರುವುದು ತಿಂಡಿ ಸವಿಯುವುದರಲ್ಲಿ ಅಲ್ಲ, ಬದಲಿಗೆ ಸಮಯ ಸಂದರ್ಭ ಎಂಥದ್ದು ಎಂಬುದರಲ್ಲಿ. ರಾಜ್ಯವು ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿರುವಾಗ, ಗಂಜಿ ಕೇಂದ್ರಗಳಲ್ಲಿ ಊಟಕ್ಕೂ ನೂಕುನುಗ್ಗಲಿರುವಾಗ ಒಬ್ಬ ಜನಪ್ರತಿನಿಧಿ ಬೆಣ್ಣೆ ಮಸಾಲೆದೋಸೆ ಚಪ್ಪರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸಂದರ್ಭವೇ ಇದನ್ನು ಅಮಾನವೀಯ ನಡೆ ಎಂದು ಹೇಳುತ್ತದೆ. ತೀರಾ ತಡೆಯಲಾಗದೆ ಬೇರೆಯವರ ಒತ್ತಾಯಕ್ಕೋ ಮತ್ತೊಂದಕ್ಕೋ ತಿಂದು ಚಪ್ಪರಿಸಲೇಬೇಕಾದ ಸಂದರ್ಭ ಬಂದರೆ ಕನಿಷ್ಠ ಆ ವಿಡಿಯೊವನ್ನು ಕಷ್ಟದಲ್ಲಿರುವವರಿಗೆ ತೋರಿಸದೆಯೂ ಇರಬಹುದಿತ್ತಲ್ಲವೇ?