2016ರ ಮಾರ್ಚ್ನಲ್ಲಿ ತುಮಕೂರಿನಲ್ಲಿ ನಡೆಯಬಾರದ ಒಂದು ಘಟನೆ ನಡೆದು ನಾಗರಿಕರನ್ನು ತಲ್ಲಣಗೊಳಿಸಿತ್ತು. ಮಗನೊಬ್ಬ ಸುಪಾರಿ ಕೊಟ್ಟು ಮಧ್ಯರಾತ್ರಿಯಲ್ಲಿ ತಂದೆತಾಯಿಯನ್ನೇ ಕೊಲೆ ಮಾಡಿಸಿಬಿಟ್ಟಿದ್ದ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಕೋರ್ಟ್ನಲ್ಲಿ ನಡೆದು ಇದೀಗ ಆದೇಶ ಹೊರಬಿದ್ದಿದೆ. ಸುಪಾರಿ ಕೊಟ್ಟ ಮಗ ಮತ್ತು ಎಲ್ಲ ಸುಪಾರಿ ಕೊಲೆಗಾರರಿಗೂ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ. ಈ ಆದೇಶ ನ್ಯಾಯಾಲಯದ ಮೇಲಿನ ಜನರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.