ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವುದು ಅತ್ಯಂತ ಹೇಯವಾದ ಕೃತ್ಯ. ನಮಸ್ಕಾರ ಮಾಡುವ ಕೈಗಳೇ ಕೊಲೆ ಮಾಡುವ ಅಸ್ತ್ರಗಳಾಗುವುದು ವಿಷಾದನೀಯ. ಗುರೂಜಿ ಅವರನ್ನುಯುವಕರು ಕೊಲ್ಲುವ ದೃಶ್ಯವನ್ನು ಟಿ.ವಿ. ಮಾಧ್ಯಮದಲ್ಲಿ ನೋಡಿದರೆ, ನಮ್ಮ ಎದುರೇ ಚುಚ್ಚಿ ಚುಚ್ಚಿ ಕೊಲ್ಲುತ್ತಿರುವಂತೆ ಭಾಸವಾಗುತ್ತದೆ. ಟಿ.ವಿ. ಚಾನೆಲ್ಗಳು ಇಂತಹ ದೃಶ್ಯಗಳನ್ನು ಪದೇಪದೇ ತೋರಿಸದೇ ಇರುವುದು ಒಳ್ಳೆಯದು.