ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸುಧೆ: ನಟರಿಗಷ್ಟೇ ಪ್ರಾಶಸ್ತ್ಯ ಸಲ್ಲ

Last Updated 19 ಜುಲೈ 2019, 20:00 IST
ಅಕ್ಷರ ಗಾತ್ರ

ಕನ್ನಡದ ವಿವಿಧ ಟಿ.ವಿ ಚಾನೆಲ್‌ಗಳು ಸಂಗೀತ ಸ್ಪರ್ಧೆ ಏರ್ಪಡಿಸುವ ಮೂಲಕ ಸಂಗೀತ ಸುಧೆಯನ್ನು ಪಸರಿಸುತ್ತಿವೆ. ಇದರಿಂದ, ಎಲೆಮರೆ ಕಾಯಿಯಂತಿರುವ ಗಾಯಕರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ವೇದಿಕೆ ಕಲ್ಪಿಸಲು ಸಾಧ್ಯವಾಗಿದೆ.

ಇದರ ಅಂಗವಾಗಿ, ಕನ್ನಡದ ಜನಪ್ರಿಯ ನಟರ ಹುಟ್ಟುಹಬ್ಬದ ವಿಶೇಷವೆಂಬಂತೆ, ಸಂಗೀತ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಆ ನಾಯಕರು ಅಭಿನಯಿಸಿದ ಚಿತ್ರದ ಹಾಡುಗಳನ್ನು ಸ್ಪರ್ಧಾಳುಗಳಿಂದ ಹಾಡಿಸಲಾಗುತ್ತದೆ. ಆದರೆ, ಆ ಹಾಡುಗಳಿಗೆ ಸಾಹಿತ್ಯ ಬರೆದ, ಸಂಗೀತ ನೀಡಿದ, ಹಿನ್ನೆಲೆಯಲ್ಲಿ ಹಾಡಿದವರ ಹೆಸರುಗಳನ್ನೇ ಕಾರ್ಯಕ್ರಮ ನಿರ್ವಾಹಕರು ಪ್ರಸ್ತಾಪಿಸುವುದಿಲ್ಲ.

ಆಯಾ ಗೀತೆಗೆ ಆ ನಟರೇ ಎಲ್ಲವೂ ಎಂಬಂತೆ ಬಿಂಬಿಸಲಾಗುತ್ತದೆ. ಒಂದು ಹಾಡು ಸೊಗಸಾಗಿ ಮೂಡಿಬರುವುದಕ್ಕೆ ಕಾರಣರಾದವರನ್ನು ಬಿಟ್ಟು, ಅದರಲ್ಲಿ ನಟಿಸಿರುವ ನಾಯಕರನ್ನಷ್ಟೇ ವೈಭವೀಕರಿಸುವುದು ಎಷ್ಟು ಸರಿ?

–ಅಂಬಿ ಎಸ್. ಹೈಯ್ಯಾಳ್,ಮುದನೂರ ಕೆ., ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT