‘ಅಮುಲ್’ ಎಂದಾಕ್ಷಣ ‘ಟೇಸ್ಟ್ ಆಫ್ ಇಂಡಿಯಾ’ ಅನ್ನುವುದು ಸಹಜ. ಆದರೆ ‘ನಂದಿನಿ’ ಬ್ರ್ಯಾಂಡ್ ನಮ್ಮ ರಾಜ್ಯದ ಹೈನುಗಾರಿಕೆಯ ಹೆಮ್ಮೆಯ ಸಂಕೇತ. ಅಮುಲ್ ಹಾಗೂ ನಂದಿನಿ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಮಂಡ್ಯ ಜಿಲ್ಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ನೋಡಿದರೆ, ವಿಲೀನದ ಮುನ್ಸೂಚನೆ ಕೊಟ್ಟಂತೆ ಕಾಣುತ್ತಿದೆ. ನಮ್ಮ ನಾಡಿನ ಅಸ್ಮಿತೆಯಾಗಿರುವ ನಂದಿನಿ ಗುರುತು ಮರೆಯಾಗಲು ಅವಕಾಶ ನೀಡಬಾರದು.