ಕರ್ನಾಟಕದಲ್ಲೂ ಬಿಜೆಪಿ ನಾಯಕರು ‘22 ಸೀಟು ಗೆದ್ದು ದೆಹಲಿ ಗದ್ದುಗೆಗೆ ಕೊಡುಗೆ ಕೊಟ್ಟೇ ತೀರುತ್ತೇವೆ’ ಎಂದಿದ್ದರು. ಇಬ್ಬರೂ ತಮ್ಮ ಗುರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ. ವಿರೋಧ ಪಕ್ಷದವರು ಮಹಾಘಟಬಂಧನ್ ಎಂದು ಬಾಯಿಮಾತಿನಲ್ಲಿ ಹೇಳಿದರೂ ಅದನ್ನು ಕಾರ್ಯರೂಪಕ್ಕೆ ತರುವ ಬದ್ಧತೆ ತೋರಲಿಲ್ಲ. ಇವರ ಆಟ ನೋಡಲಾರದೆ ದೇಶದ ಪ್ರಜೆಗಳು ಬಿಜೆಪಿ ಕಡೆ ವಾಲಿದ್ದಾರೆ. ಈ ಫಲಿತಾಂಶಕ್ಕೆ ಎಲ್ಲರೂ ತಲೆಬಾಗಲೇಬೇಕಾಗಿದೆ.