ಯಾರೋ ಪುಂಡು ಪೋಕರಿಗಳು ಮಾಡಿದರೆ ಆ ಮಾತು ಬೇರೆ. ಕೆಲವು ಟೆಕಿಗಳು ಇದರ ಹಿಂದೆ ಇರುವುದು ಪ್ರಜ್ಞಾವಂತರನ್ನು ವಿಚಲಿತರನ್ನಾಗಿಸಿದೆ. ರಾಹುಲ್ ಕಾರ್ಯವೈಖರಿ, ಅವರ ಪಕ್ಷದ ತತ್ವ, ಆದರ್ಶಗಳಲ್ಲಿ ವಿಶ್ವಾಸ ಇಲ್ಲದಿದ್ದರೆ ಅವರ ಸಭೆಯನ್ನು ಬಹಿಷ್ಕರಿಸಲಿ. ವಿರೋಧ ರಚನಾತ್ಮಕವಾಗಿ ಇರಬೇಕೇ ವಿನಾ ತೀರಾ ಕೆಳಮಟ್ಟಕ್ಕೆ ಇಳಿಯಬಾರದು. ಇದು ಎಲ್ಲಾ ಪಕ್ಷಗಳಿಗೂ ಅನ್ವಯಿಸುತ್ತದೆ.