ಕೇಂದ್ರ ಸರ್ಕಾರವು ಖನಿಜ ಸಂಪನ್ಮೂಲಕ್ಕಾಗಿ ಸಮುದ್ರ ಮಥನಕ್ಕೆ ಕೈ ಹಾಕಿರುವ ಕುರಿತ ಟಿ.ಆರ್.ಅನಂತರಾಮು ಅವರ ಲೇಖನ (ಪ್ರ.ವಾ., ಸೆ. 4) ಓದಿ ದಿಗ್ಭ್ರಮೆಯಾಯಿತು. ಸಾಗರದ ತಳದಲ್ಲಿ ಗಣಿಗಾರಿಕೆ ಮಾಡಿ ಅತ್ಯಮೂಲ್ಯ ಲೋಹದುಂಡೆಗಳನ್ನು ಪಡೆದು, ಆ ಲೋಹಗಳ ಆಮದಿನ ಖರ್ಚನ್ನೇನೋ ಉಳಿಸಿಕೊಳ್ಳಬಹುದು. ಆದರೆ ಅಂಕಣದಲ್ಲಿ ವಿವರಿಸಿರುವಂತೆ, ಗಣಿಗಾರಿಕೆಯಿಂದಾಗುವ ಮಾಲಿನ್ಯದಿಂದ ಸಾಗರದಾಳದಲ್ಲಿನ ಜೀವ ಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯವೇ? ಅದು ಅಸಾಧ್ಯವೆಂದಾದ ಮೇಲೆ ನಿಸರ್ಗಕ್ಕೆ ಪೆಟ್ಟು ಕೊಡುವ ಇಂತಹ ಕ್ರಿಯೆಗಳನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ.