ಕಾರ್ಮಿಕರಿಗೆ ಕಳಪೆ ಆಹಾರದ ಕಿಟ್ ವಿತರಿಸಿ, ಪ್ರತೀ ಕಿಟ್ನಲ್ಲಿ ₹ 300 ಕಮಿಷನ್ ಹೊಡೆಯಲಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿರುವುದು ವರದಿಯಾಗಿದೆ (ಪ್ರ.ವಾ., ಜೂನ್ 25). ತಿನ್ನುವ ಆಹಾರಕ್ಕೆ ಹೀಗೆ ಹುಳ ಹಿಡಿದ ಬೇಳೆ, ಮುಗ್ಗಲು ಅಕ್ಕಿ ಕೊಟ್ಟರೆ ಕಾರ್ಮಿಕ ಕುಟುಂಬದವರ ಆರೋಗ್ಯದ ಮೇಲೆ ಎಂತಹ ಪರಿಣಾಮ ಆಗಬಹುದು? ಹೀಗೆ ಆಹಾರದ ಕಿಟ್ಗಳ ವಿತರಣೆಗೆಂದು ಕಂಪನಿಗಳಿಗೆ ಗುತ್ತಿಗೆ ಕೊಡುವ ಬದಲು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವುದು ಸೂಕ್ತ.