ಈಗ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಜೀವಕ್ಕೆ ಹೆದರಿ ಲಾಕ್ಡೌನ್ ಮಾಡುವಂತೆ ಗೋಗರೆಯುತ್ತಿದ್ದಾರೆ. ಕೋವಿಡ್ಗೆ ಇನ್ನೂ ಔಷಧಿ ಕಂಡುಹಿಡಿಯದೇ ಇರುವುದರಿಂದ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಹಾಗೆಂದು ಅಲ್ಲಿಯವರೆಗೂ ಲಾಕ್ಡೌನ್ ಘೋಷಣೆಯೊಂದೇ ಪರಿಹಾರವಲ್ಲ. ಅದರ ಬದಲು ಜನರೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದಾಗ ಮಾತ್ರ ಹೊರಗೆ ಬಂದು, ತಮ್ಮ ಜೀವದ ಬಗ್ಗೆ ಸ್ವತಃ ಕಾಳಜಿ ವಹಿಸುವುದು ಒಳ್ಳೆಯದು.