ಅಭಿಯಾನದ ಅಂಗವಾಗಿ ಸಂಘದ ನೇತೃತ್ವದಲ್ಲಿ ರಾಜ್ಯದಾದ್ಯಂತ 164 ಕೇಂದ್ರಗಳಲ್ಲಿ ಒಟ್ಟಾರೆ 20,254 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಕ್ಟೋರಿಯಾ ರಕ್ತನಿಧಿ, ಲಯನ್ಸ್ ಎಲೈಟ್, ರೋಟರಿ ರಕ್ತನಿಧಿಗಳ ಸಹಯೋಗದಲ್ಲಿ ರಕ್ತವನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಬಹುಭಾಗವನ್ನು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಇತರ ಕೇಂದ್ರಗಳಲ್ಲೂ ಇಂಥ ವ್ಯವಸ್ಥೆಯನ್ನು ಮಾಡಿ, ಒಂದು ಯೂನಿಟ್ ರಕ್ತವೂ ಪೋಲಾಗದಂತೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಉಚಿತವಾಗಿ ಲಭ್ಯವಾಗುವಂತೆ ಎಚ್ಚರ ವಹಿಸಲಾಗಿದೆ.