ಹಾಲಿ ಕಾನೂನಿನ ಯಾವುದೇ ಅರಿವಿಲ್ಲದ ನನ್ನ ಸ್ನೇಹಿತನೊಬ್ಬ ಹೊಸದಾಗಿ ಕೃಷಿ ಮಾಡಲು ಹೋಗಿ, ಎಲ್ಲಾ ಇಲಾಖೆಗಳಲ್ಲಿ ಲಂಚ ಕೊಟ್ಟರೂ ಜಮೀನು, ತೋಟ ಆತನ ಹೆಸರಿಗೆ ಆಗದೆ ಮಾನಸಿಕ ತೊಳಲಾಟ, ಒತ್ತಡಕ್ಕೆ ಸಿಲುಕಿ ಹೃದಯಾಘಾತಕ್ಕೊಳಗಾದ. ವಸ್ತುಸ್ಥಿತಿ ಹೀಗಿರುವಾಗ, ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಸ್ವಾಗತಾರ್ಹ.