ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿತ್ತು. ಇದರಿಂದ ರೈತರು ಖುಷಿಪಟ್ಟಿದ್ದರು. ಆದರೆ ವಾಸ್ತವ ಬೇರೆ. ಹೆಸರು ಬೆಳೆ ಕಟಾವು ಆಗಿದ್ದರೂ ಖರೀದಿ ಕೇಂದ್ರಗಳು ತೆರೆಯಲೇ ಇಲ್ಲ. ಖರೀದಿ ಕೇಂದ್ರಗಳು ಆರಂಭವಾಗುವವರೆಗೂ ಫಸಲನ್ನು ಸಂಗ್ರಹಿಸಿ, ಕಾಯುತ್ತಾ ಕೂರುವಷ್ಟು ಶಕ್ತಿ ಸಣ್ಣ ರೈತರಿಗೆ ಇಲ್ಲದೆ, ಕಟಾವಾದ ಕೂಡಲೇ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಮಾರಿದ್ದಾರೆ.