ಭಾರತ– ಪಾಕ್ ನಡುವಿನ ರೈಲು ಸಂಚಾರಕ್ಕೆ ತಡೆ ಒಡ್ಡುವುದರಿಂದ, ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನುಸ್ಥಗಿತಗೊಳಿಸುವುದರಿಂದ ಪಾಕಿಸ್ತಾನಕ್ಕೆ ಏನೂ ಪ್ರಯೋಜನವಾಗದು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತಿದೆ ಹತಾಶ ಪಾಕಿಸ್ತಾನದ ಈ ಬಗೆಯ ಬೆದರಿಕೆ.
ನಮಗೆ ಬೇಕಿರುವುದು ನಮ್ಮಿಂದ ಕಿತ್ತುಕೊಂಡ ಕಾಶ್ಮೀರದ ಪ್ರದೇಶ ಹಾಗೂ ಅಲ್ಲಿ ನೆಲೆಸಿರುವ ನಮ್ಮ ಸಹೋದರಿ, ಸಹೋದರರ ಕ್ಷೇಮ. ಹೀಗಾಗಿ, ಪಾಕಿಸ್ತಾನದ ಬೆದರಿಕೆಗಳಿಗೆ ಜಗ್ಗದೆ, ಈ ಬಗೆಗಷ್ಟೇ ನಾವು ಯೋಚಿಸಬೇಕು.