ಪ್ರವಾಹ ಎದುರಾದ ಸಂದರ್ಭಗಳಲ್ಲಿ, ಮುಖ್ಯಮಂತ್ರಿಯಾದವರು ಸಾಮಾನ್ಯವಾಗಿ ವೈಮಾನಿಕ ಸಮೀಕ್ಷೆ ನಡೆಸುತ್ತಾರೆ. ಅಧಿಕಾರಿಗಳಿಂದ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಯೂ ನಡೆಯುತ್ತದೆ. ಆದರೆ ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಪ್ರವಾಹ ಇಳಿದು, ಹಳ್ಳಿಗಳು ಯಥಾಸ್ಥಿತಿಗೆ ಬಂದಾಗ ಅಲ್ಲಿಗೆ ಭೇಟಿ ನೀಡಿ ನಿಜಸ್ಥಿತಿ ಅರಿಯುವ, ಪರಿಹಾರೋಪಾಯಗಳನ್ನು ಶೋಧಿಸುವ ಗೋಜಿಗೂ ಯಾರೂ ಹೋಗುವುದಿಲ್ಲ.