ಇತ್ತೀಚಿನ ದಿನಗಳಲ್ಲಿ ಕೆಲವು ನಿಗಮ, ಶಾಲೆ, ಕಾಲೇಜುಗಳು ಗುತ್ತಿಗೆ ಆಧಾರದ ಮೇಲಿನ ನೌಕರಿಯೆಂದು 10-16 ವರ್ಷ ದುಡಿಸಿಕೊಂಡು, ಅವರಿಗೆ ಯಾವ ದಾರಿಯನ್ನೂ ತೋರಿಸದೆ ಅತಂತ್ರ ಸ್ಥಿತಿಯಲ್ಲಿ ಇಡುತ್ತಿವೆ. ಅಂತಹ ಸ್ಥಿತಿ ಇವರಿಗೂ ಒದಗಬಾರದು. ಮುಂದೆ ನೇಮಕಾತಿಗಳ ವೇಳೆ ಟ್ರೈನಿಗಳಿಗೆ ಮೊದಲ ಆದ್ಯತೆ (ವಯೋಮಾನದ ಮೇಲೆ) ನೀಡಬೇಕು. ಇಲ್ಲವೇ ಅರಸು ಅವರ ಅವಧಿಯಲ್ಲಿ ಮಾಡಿದಂತೆ ಮುಂದೆ ಇವರ ಸೇವೆಯನ್ನು ಕಾಯಂಗೊಳಿಸಬೇಕು. ಇದರಿಂದ ಯುವಶಕ್ತಿಯ ಸದ್ಬಳಕೆ ಆಗುವುದರ ಜೊತೆಗೆ ನಿರುದ್ಯೋಗದ ಸಮಸ್ಯೆಗೂ ಪರಿಹಾರ ಸಿಗುತ್ತದೆ.