ತರಬೇತಿ ಪಡೆದು ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು (ಪ್ರ.ವಾ., ನ. 22) ಸರಿಯಲ್ಲ. ನುರಿತ, ಅನುಭವಿ ವೈದ್ಯರು ಮಾಡುವ ಶಸ್ತ್ರಚಿಕಿತ್ಸೆಗಳಲ್ಲೇ ಹಲವು ಎಡವಟ್ಟುಗಳಾಗುತ್ತಿರುವುದನ್ನು (ಕತ್ತರಿ, ಬ್ಲೇಡು ದೇಹದಲ್ಲೇ ಬಿಟ್ಟು ಹೊಲಿಗೆ ಹಾಕಿದ ಉದಾಹರಣೆಗಳಿವೆ) ನೋಡುತ್ತಿರುತ್ತೇವೆ.