ಮಹನೀಯರು, ಮಹಾತ್ಮರ ದಿನಾಚರಣೆಗಳನ್ನು ಸಾಲುಸಾಲಾಗಿ ಆಚರಿಸುತ್ತಿರುವ ನಮ್ಮ ನಾಯಕರು, ಆ ಮಹನೀಯರ ಒಂದಾದರೂ ಆದರ್ಶ, ಮೌಲ್ಯವನ್ನು ರೂಢಿಸಿಕೊಂಡಿರುವರೇ?
ಮಹಾತ್ಮರ ಭಾವಚಿತ್ರವನ್ನು ಮುಂದಿಟ್ಟುಕೊಂಡು, ಮೆರವಣಿಗೆ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರ ಒಳಉದ್ದೇಶಗಳನ್ನು ಜನರು ಅರಿಯಬೇಕು.ಜಯಂತಿ ಆಚರಿಸುವ ಕೆಲಸ ಸರ್ಕಾರದ್ದಲ್ಲ. ಅದರಿಂದ ಬಿಡಿಸಿಕೊಳ್ಳಲು ಇನ್ನಾದರೂ ಪ್ರಯತ್ನಿಸಲಿ.