ಎಚ್.ಎಸ್.ದೊರೆಸ್ವಾಮಿ ಅವರನ್ನು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಟೀಕಿಸಿರುವುದು ಖಂಡನೀಯ. ಬಿಜೆಪಿಯ ಹಲವು ಮುಖಂಡರು ಪದೇ ಪದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ಮೂಲಕ ವಿವಾದಗಳನ್ನು ಹುಟ್ಟುಹಾಕುತ್ತಲೇ ಇದ್ದಾರೆ. ಯತ್ನಾಳ ಅವರು ವಯೋವೃದ್ಧ ದೊರೆಸ್ವಾಮಿ ಅವರ ಬಗ್ಗೆ ಈಗ ಲಘುವಾಗಿ ಮಾತನಾಡಿದ್ದಾರೆ. ಜನಪ್ರತಿನಿಧಿಗಳು ಹೀಗೆ ಬಾಯಿಗೆ ಬಂದಂತೆ ಮಾತನಾಡಿ ವಿವಾದ ಸೃಷ್ಟಿಸಿ, ಆಮೇಲೆ ವಿಷಾದಿಸುವುದು ರೂಢಿಯಂತಾಗಿದೆ.