‘ಅಂತೂ ಇಂತೂ ಕುಂತಿಪುತ್ರರಿಗೆ ರಾಜ್ಯ ಸಿಕ್ಕಿತು’ ಎಂಬಂತೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ, ಸಪ್ತ ಮಹಾರಥಿಗಳಿಗೆ ಸಚಿವ ಪಟ್ಟ ದಕ್ಕಿದೆ. ಯಡಿಯೂರಪ್ಪನವರು ಉಸ್ಸಪ್ಪಾ ಎನ್ನುವಷ್ಟರಲ್ಲಿ, ಪಟ್ಟವಂಚಿತರ ಗೋಳು, ನಿಟ್ಟುಸಿರು, ಕಣ್ಣೀರಧಾರೆ, ವಾಗ್ದಾಳಿ, ಪ್ರತಿಭಟನೆ, ಶಾಪಗಳು ಪುಂಖಾನುಪುಂಖವಾಗಿ ತೂರಿ ಬರುತ್ತಿವೆ.