ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕು ಶಂಕಿತರು ಗಲಾಟೆ ನಡೆಸಿ, ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ನಮಗಾಗಿ ಹಗಲಿರುಳು ಶ್ರಮಿಸುತ್ತಿರುವವರ ಮೇಲೆ ಗೂಂಡಾಗಳ ರೀತಿ ಗುಂಪುಹಲ್ಲೆ ನಡೆಸುವುದು ದುರದೃಷ್ಟಕರ. ಮಾನವೀಯ ಮೌಲ್ಯಗಳು ಜನರ ಕಣ್ಣಿಗೆ ಕಾಣುತ್ತಿಲ್ಲವೇ? ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ವ್ಯಕ್ತಿಗಳನ್ನು ಮೊದಲು ಬಂಧಿಸಬೇಕು. ಈ ವಿಷಯದಲ್ಲಿ ರಾಜಿ, ರಾಜಕೀಯಸಲ್ಲದು.