ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಸೇವೆ ವಿಳಂಬವೇಕೆ?

Last Updated 6 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕೊರಿಯರ್ ಸೇವೆ ಪ್ರಬಲವಾಗುತ್ತಾ ಬಂದಂತೆ ಅಂಚೆ ಸೇವೆ ವಿಳಂಬವಾಗುತ್ತಿದೆ. ಅನೇಕ ಆಹ್ವಾನ ಪತ್ರಿಕೆಗಳು ಕಾಯ೯ಕ್ರಮ ನಡೆದ ಮೇಲೆ ಅಥವಾ ಅದೇ ದಿನ ಬಂದಿವೆ. ಆಗಸ್ಟ್‌ ಎರಡರಂದು ಬೆಂಗಳೂರಿನ ವಿಜಯನಗರದಲ್ಲಿ ಅಂಚೆಗೆ ಹಾಕಿದ ಒಂದು ಆಹ್ವಾನ ಪತ್ರ, ನನಗೆ ತುಮಕೂರಿನಲ್ಲಿ ಆರನೇ ತಾರೀಖು ತಲುಪಿದೆ. ಬೆಂಗಳೂರಿನಿಂದ ತುಮಕೂರು ವಿಳಾಸಕ್ಕೆ ಒಂದು ಪತ್ರ ತಲುಪಲು ಇಷ್ಟು ದಿನ ಬೇಕೇ?

ಇದೊಂದು ಸಾವ೯ಜನಿಕ ಸೇವೆ ಆಗಿರುವುದರಿಂದ, ಅಂಚೆ ಇಲಾಖೆಯು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಪತ್ರಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು. ಎಲ್ಲರೂ, ಎಲ್ಲ ಸಂದಭ೯ದಲ್ಲಿಯೂ ₹ 40-50 ಖಚು೯ ಮಾಡಿ ಕೊರಿಯರ್‌ ಅನ್ನೇ ಮಾಡಲಾಗುವುದಿಲ್ಲ. ಇಂತಹ ಸಂದಭ೯ದಲ್ಲಿ ಅಂಚೆ ಸೇವೆಯ ಮೇಲೆ ಭರವಸೆ ಇಡುವ ಜನರಿಗೆ ಇಲಾಖೆ ನ್ಯಾಯ ಒದಗಿಸಬೇಕು.

– ರಮಾಕುಮಾರಿ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT