ರಾಜ್ಯದಲ್ಲಿರುವ ಪೌರ ಕಾರ್ಮಿಕರು ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುವ ಇವರು ಸೇವಾ ಅಭದ್ರತೆಯ ನಡುವೆಯೇ ನಗರ, ಪಟ್ಟಣಗಳ ಶುಚಿತ್ವಕ್ಕಾಗಿ ದುಡಿಯುವ ಶ್ರಮಜೀವಿಗಳು. ಪೌರ ಕಾರ್ಮಿಕರ ಸೇವಾಕಾರ್ಯ ಅನನ್ಯವಾಗಿದ್ದು, ಅದಕ್ಕೆ ಬೆಲೆ ಕಟ್ಟಲಾಗದು.