ಕೆಲವು ರಾಜ್ಯಗಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ನೇತಾರರು ಮತದಾರರಿಗೆ ಕೊಡುತ್ತಿರುವ ಭರವಸೆಗಳನ್ನುಈ ಮಾತಿಗೆ ಸಮರ್ಥನೆಯಾಗಿ ನೋಡಬಹುದು. ನಮ್ಮ ಪಕ್ಷಗಳಿಗೆ ಆದ್ಯತೆಗಳು ಬೇರೆಯೇ ಇವೆ. ದೇವರು, ಧರ್ಮ, ದೇವಸ್ಥಾನ, ಪೂಜೆ ಪುನಸ್ಕಾರಗಳಂಥ ಭಾವನಾತ್ಮಕ ಸಂಗತಿಗಳೇ ಅವುಗಳಿಗೆ ಹೆಚ್ಚು ಪ್ರಿಯ. ಕಲರ್ ಟಿ.ವಿ., ಫ್ರಿಜ್, ವಾಷಿಂಗ್ ಮಷೀನ್, ಲ್ಯಾಪ್ಟಾಪ್ನಂತಹ ಉಡುಗೊರೆಗಳ ಪೂರೈಕೆಯ ಘೋಷಣೆಗಳೇ ಅವುಗಳಿಗೆ ಹೆಚ್ಚು ಲಾಭದಾಯಕ.ಬಡತನ ನಿವಾರಣೆಯಂತಹ ದೀರ್ಘಾವಧಿ ಯೋಜನೆಗಳು ಬೇಕಾಗಿಲ್ಲ. ಆದ್ದರಿಂದ ಲೇಖಕರ ಆಶಯದಂತೆ ಬಡತನ ನಿವಾರಣೆಗೆ ಚೀನಾದಿಂದ ಪಾಠ ಕಲಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.