ಆಲಪ್ಪುಳ, ಫೆ. 6 (ಪಿಟಿಐ, ಯುಎನ್ಐ)– ಚೇರ್ತಲಕ್ಕೆ ಸಮೀಪದ ಚಮ್ಮನಾಡು ಎಂಬಲ್ಲಿ ನಿನ್ನೆ ಮಧ್ಯರಾತ್ರಿ ವೇಳೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಮತ್ತು ಲಾರಿಯೊಂದು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆಯರೂ ಮಕ್ಕಳೂ ಸೇರಿದಂತೆ 40 ಮಂದಿ ಸಜೀವ ದಹನಗೊಂಡರು. 69 ಮಂದಿ ಗಾಯಗೊಂಡಿದ್ದಾರೆ.