ಬೆಂಗಳೂರು, ಫೆ. 6– ದಕ್ಷಿಣದಲ್ಲಿ ಸಂಸತ್ ಅಧಿವೇಶನ ಸಾಧ್ಯವಿಲ್ಲ ಎಂಬುದು ಶ್ರೀ ರಾಣೆ ಸಮಿತಿಯ ಒಟ್ಟು ಅಭಿಪ್ರಾಯವಾಗಿದೆ ಎಂಬ ದೆಹಲಿ ವರದಿಯನ್ನು ಸರಿಯಾದುದಲ್ಲ ಎಂದು ನಿರಾಕರಿಸಿದ, ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಕೆಂಗಲ್ ಹನುಮಂತಯ್ಯ ಅವರು ‘ಈ ಪ್ರಶ್ನೆ ಇನ್ನೂ ಪರಿಶೀಲನೆಯ ಘಟ್ಟದಲ್ಲಿದೆ’ ಎಂದಿದ್ದಾರೆ.