ನವದೆಹಲಿ, ಫೆ. 27– ತುಮಕೂರು ಎಚ್ಎಂಟಿ ಕೈಗಡಿಯಾರ ಕಾರ್ಖಾನೆಯ ಕಾರ್ಯನಿರ್ವಹಣೆ, ಅದರ ಉತ್ಪಾದನೆ, ವಹಿವಾಟು ಮತ್ತು ಲಾಭ ಮತ್ತಿತರ ವಿಷಯಗಳ ಬಗೆಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ಮೂವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ಆಜ್ಞೆ ಹೊರಡಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ.ಜಿ. ಮೆನನ್ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಶೀಲ್ ಕುಮಾರ್ ಮತ್ತು ಎಚ್ಎಂಟಿ ಸಂಸ್ಥೆಯ ಜಗನ್ನಾಥನ್ ಸದಸ್ಯ ಕಾರ್ಯದರ್ಶಿ ಆಗಿ ನೇಮಕಗೊಂಡಿದ್ದಾರೆ.
ರಥಯಾತ್ರೆ
ರಾಜಕೋಟೆ, ಫೆ. 27 (ಯುಎನ್ಐ)– ದೇಶದ ಪ್ರಮುಖ ಸಾಧುಸಂತರ ಅಭಿಲಾಷೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯವನ್ನು ನಿರ್ಮಿಸುವ ಸಲುವಾಗಿ ಜನರ ಅಭಿಪ್ರಾಯ ಸಂಗ್ರಹಿಸಲು ದ್ವಾರಕ ಪೀಠದ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ರಥಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
‘ದಶರಥ ಕೌಸಲ್ಯ’ ಎಂಬ ಈ ರಥಯಾತ್ರೆ ಶಿವರಾತ್ರಿ ದಿನದಂದು (ಮಾ. 10) ಜುನಾಗಡದಿಂದ ಪ್ರಾರಂಭವಾಗಲಿದೆ.