ನರೇಗಾ ಅಕ್ರಮ ಪ್ರಶ್ನಿಸಿದ್ದಕ್ಕೆ ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಹಲಸಿನಮರದ ದೊಡ್ಡಿ ಗ್ರಾಮದಲ್ಲಿ ಮೂರ್ತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 24). ಇಲ್ಲಿ ಯುವಕ ಮಾಡಿದ ತಪ್ಪಾದರೂ ಏನು? ಅಕ್ರಮವನ್ನು ಪ್ರಶ್ನಿಸುವುದು ತಪ್ಪೇ? ಹಾಗಿದ್ದರೆ ಅಕ್ರಮವನ್ನು ನೋಡಿಕೊಂಡು ಆತ ಸುಮ್ಮನೆ ಕುಳಿತಿರಬೇಕಿತ್ತೇ? ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವುದು ಎಲ್ಲಾ ನಾಗರಿಕರ ಹಕ್ಕು. ಆದರೆ ಹೀಗೆ ಪ್ರಶ್ನಿಸಿದ ಯುವಕ ಹೆಣವಾದದ್ದು ತೀವ್ರ ಖಂಡನೀಯ.