ಅಗತ್ಯ ಸೇವೆ ಹಾಗೂ ತುರ್ತು ಕರೆಗಳಿಗಾಗಿ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಿಗೆ ಸಹಾಯವಾಣಿ ವ್ಯವಸ್ಥೆ ರೂಪಿಸಿದ ನಡೆ ಶ್ಲಾಘನೀಯ. ಆದರೆ ಕೆಲ ಇಲಾಖೆಗಳ ಸಹಾಯವಾಣಿಗಳಿಗೆ ಸಾರ್ವಜನಿಕರು ತಮ್ಮ ಸಂಕಷ್ಟ, ಅಭಿಪ್ರಾಯ, ಅಹವಾಲುಗಳನ್ನು ತಿಳಿಸಲು ಕರೆ ಮಾಡಿದಾಗ, ಅವು ನಿಷ್ಕ್ರಿಯಗೊಂಡಿರುವುದು ಕಂಡುಬರುತ್ತಿದೆ. ‘ನೀವು ಪ್ರಯತ್ನಿಸುತ್ತಿರುವ ಲೈನ್ ಅಸ್ತಿತ್ವದಲ್ಲಿಲ್ಲ’, ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’, ‘ನೀವು ಡಯಲ್ ಮಾಡಿದ ಸಂಖ್ಯೆಯನ್ನು ದಯವಿಟ್ಟು ಪರಿಶೀಲಿಸಿ’... ಹೀಗೆ ಸಲ್ಲದ ಧ್ವನಿಮುದ್ರಿತ ಹೇಳಿಕೆಗಳು ಕೇಳಿಬರುತ್ತವೆ. ಕೆಲವೊಮ್ಮೆ ರಿಂಗ್ ಆದರೂ ಪೋನ್ ಎತ್ತುವಲ್ಲಿ ಉದಾಸೀನ ಎದ್ದು ಕಾಣುತ್ತಿದೆ. ಇದರಿಂದ ಜನರು ರೋಸಿ
ಹೋಗುವಂತಾಗಿದೆ.