ನವೆಂಬರ್ 11ರಿಂದ 13ರವರೆಗೆ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆರವೇರಲಿ
ರುವುದು ಸಂತೋಷ. ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಾಹಾರ, ಬೋಜನ ವಿತರಿಸುವುದೇ ಆಯೋಜಕರ ಪಾಲಿಗೆ ದೊಡ್ಡ ಸವಾಲು. ಭೋಜನ ವ್ಯವಸ್ಥೆಯ ಸುತ್ತಲೇ ದೂರು ದುಮ್ಮಾನಗಳು ಗಿರಕಿ ಹೊಡೆಯುವುದನ್ನು ಹಿಂದೆ ಕಂಡಿದ್ದೇವೆ. ಗೌಜು, ಗದ್ದಲವೂ ಆಗಿವೆ. ಊಟದ ಏರ್ಪಾಡು, ಸಮ್ಮೇಳನದ ಯಶಸ್ಸಿನ ಮಾನಕ ಎನ್ನುವಂತಾಗಿದೆ. ಸಂವಾದ, ಗೋಷ್ಠಿ, ನಿರ್ಣಯಗಳಿಗಿಂತಲೂ ಭೋಜನಕ್ಕೆ ಏನೇನು ತಯಾರಿ? ಹೇಗೆ ಪರಿಚಾರಿಕೆ? ಸೇವಿಸಿದವರೆಷ್ಟು?... ಈ ಕುರಿತ ವರದಿಗಳೇ ಮಾಧ್ಯಮಗಳಲ್ಲಿ ಹೆಚ್ಚು ವಿಜೃಂಭಿಸುತ್ತವೆ.