ಮೀಸಲಾತಿಗೆ ಸಂಬಂಧಿಸಿದಂತೆ ಸಮಕಾಲೀನ ಸವಾಲುಗಳನ್ನು ಎದುರಿಸಬೇಕಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿರುವುದು (ಪ್ರ.ವಾ., ಆ. 8) ಸಕಾಲಿಕವಾಗಿದೆ. ಸ್ವಾತಂತ್ರ್ಯದ ನಂತರ ಆಧುನಿಕತೆ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಅವಕಾಶಗಳು, ಸೌಲಭ್ಯಗಳು ಪ್ರವಾಹದೋಪಾದಿಯಲ್ಲಿ ತೆರೆದುಕೊಂಡಿವೆ. ಮೀಸಲಾತಿಯಿಂದಾಗಿ ಹಿಂದುಳಿದವರು ಮತ್ತು ದಲಿತರು ವಿವಿಧ ಕ್ಷೇತ್ರಗಳಲ್ಲಿ ಆರೇಳು ದಶಕಗಳಿಂದ ಅವಕಾಶ ಪಡೆದಿದ್ದಾರೆ. ಅದೇ ವೇಳೆ ‘ಮುಂದುವರಿದವರು’ ಎಂದು ಪರಿಗಣಿತವಾದವರಲ್ಲಿ ಅವಕಾಶ ವಂಚಿತರು ಮತ್ತು ಬಡವರ ಸಂಖ್ಯೆ ಹೆಚ್ಚುತ್ತಿದೆ.