ಕೆಲವು ಶಿಕ್ಷಕರು ತಮ್ಮ ದುಡಿಮೆಯ ಹಣದಲ್ಲಿ ಒಂದಿಷ್ಟು ಭಾಗವನ್ನು ಶಾಲೆಯ ಅಭಿವೃದ್ಧಿಗೆ ಹಾಕಿ, ವಿದ್ಯಾರ್ಥಿಗಳ ಒಳಿತಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ಅಕ್ರಮದ ದಾರಿಯಿಂದ ಬಂದ ವ್ಯಕ್ತಿಗಳಿಂದ ಅಕ್ಷರ ಕಲಿತ ಮಕ್ಕಳು ಸಾಧಿಸುವುದಾದರೂ ಏನು? ಕಾಯಾ ವಾಚಾ ಮನಸಾ ಕಲಿಸಿದಾಗ, ತೊಡಗಿಸಿಕೊಂಡಾಗ ಕಿಂಚಿತ್ ಕಲಿಕೆ ಸಾಧ್ಯ. ಬಂಧನಕ್ಕೆ ಒಳಗಾಗಿರುವ ಶಿಕ್ಷಕರು ಮಕ್ಕಳ ದೃಷ್ಟಿಯಲ್ಲಿ ಏನಾಗುತ್ತಾರೆ? ಆ ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಇವರಿಗೆ ಇದೆಯೇ?