ಸೋಮವಾರ, 11 ಮೇ 2026
×
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 27 ಏಪ್ರಿಲ್ 2026, 19:52 IST
Last Updated : 27 ಏಪ್ರಿಲ್ 2026, 19:52 IST
ADVERTISEMENT
ಫಾಲೋ ಮಾಡಿ
Comments
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ. ‘ಯಾವುದೇ ದೇವಸ್ಥಾನದಲ್ಲಿ ಪಾಲಿಸಿಕೊಂಡು ಬರುತ್ತಿರುವ ಧರ್ಮದ ಆಚರಣೆಗಳ ಸ್ವರೂಪವು ಧರ್ಮದ ಅವಿಭಾಜ್ಯ ಅಂಗ; ಅವು ಧಾರ್ಮಿಕ ಆಚರಣೆಯೇ ಆಗಿರುತ್ತವೆ. ಅಂತಹ ಆಚರಣೆಗಳ ಮುಂದುವರಿಕೆ ಅತ್ಯಗತ್ಯ’ವೆಂದು ದೇಗುಲದ ಪರ ವಕೀಲರು ಸಮರ್ಥಿಸಿಕೊಂಡಿದ್ದಾರೆ. ಹಾಗಿದ್ದರೆ ಈ ಹಿಂದೆ ದೇವಸ್ಥಾನಗಳಲ್ಲಿ ಪಾಲಿಸಿಕೊಂಡು ಬರುತ್ತಿದ್ದ ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಮಡೆಸ್ನಾನ, ಮತ್ತು ಸಿಡಿ ಆಚರಣೆಯಂತಹ ಅನಿಷ್ಟ ಪದ್ಧತಿಗಳನ್ನು ಧರ್ಮದ ಸ್ವರೂಪ ಎನ್ನಲು ಸಾಧ್ಯವೇ? ಅವುಗಳನ್ನು ಧರ್ಮದ ಅವಿಭಾಜ್ಯ ಅಂಗವೆಂದು ಪರಿಭಾವಿಸಬಹುದೇ? ಸಾಮಾಜಿಕ ಸಮಾನತೆಯಿಂದ ಮಹಿಳೆಯರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.
 ಆರ್. ಕುಮಾರ್, ಬೆಂಗಳೂರು‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT