<p><strong>ವಿದ್ಯುತ್ ಕಣ್ಣಾಮುಚ್ಚಾಲೆ: ರೈತರ ಸಂಕಟ</strong></p><p>ರೈತರಿಗೆ ಸಮರ್ಪಕವಾಗಿ ತ್ರಿಪೇಸ್ ವಿದ್ಯುತ್ ನೀಡುವುದರಲ್ಲಿ ರಾಜ್ಯ ಸರ್ಕಾರ ಎಡವಿದೆ. ವಿದ್ಯುತ್ ಪೂರೈಕೆಯಲ್ಲಿನ ಅಸ್ತವ್ಯಸ್ತತೆಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಕೃಷಿ ಪಂಪ್ಸೆಟ್ಗಳಿಗೆ ಹೆಚ್ಚಾಗಿ ರಾತ್ರಿವೇಳೆ ವಿದ್ಯುತ್ ನೀಡಲಾಗುತ್ತದೆ. ಜಮೀನುಗಳಿಗೆ ತೆರಳುವ ರೈತರು ವಿಷಜಂತುಗಳ ಹಾವಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.</p><p>ರೈತ ಮೃತಪಟ್ಟರೆ ಆತನ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ರಾತ್ರಿವೇಳೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾದರೆ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರವೂ ದೊರೆಯುವುದಿಲ್ಲ. ಹಗಲಿನ ಹೊತ್ತು ವಿದ್ಯುತ್ ಪೂರೈಸುವುದೇ ಈ ಸಮಸ್ಯೆಗಿರುವ ಏಕೈಕ ಪರಿಹಾರ. ರೈತರ ಹಿತದೃಷ್ಟಿಯಿಂದ ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಈ ದಿಸೆಯಲ್ಲಿ ಹೆಜ್ಜೆ ಇಡಲಿ.</p><p><em>– ಷಣ್ಮುಖ ಎಸ್.ಎಚ್., ದಾವಣಗೆರೆ</em></p><p> ________________</p><p><strong>ಅಲಿಪ್ತ ನೀತಿ: ವಿದಾಯ ಹೇಳಲಾಗಿದೆಯೆ?</strong></p><p>ಭಾರತದ ವಿದೇಶಾಂಗ ನೀತಿಯು ಜನಸಾಮಾನ್ಯರಿಗೆ ಅರ್ಥವಾಗಬೇಕು; ಅದರ ಆಳ ಅಗಲವನ್ನು ಸರ್ಕಾರ ದೇಶಕ್ಕೆ ತಿಳಿಸಬೇಕೆಂದು ನಾಗರಿಕರು ಬಯಸುವುದಿಲ್ಲ. ಆದರೆ, ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳನ್ನು ಉಲ್ಲೇಖಿಸಬಹುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಬೆನ್ನಲ್ಲೇ ಇರಾನ್ನ ಪರಮೋಚ್ಚನಾಯಕ ಅಯಾತೊಲ್ಲಾ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ಸೇರಿ ಹತ್ಯೆ ಮಾಡಿವೆ. ಅದಕ್ಕಾಗಿ ಸಂತಾಪ ಸೂಚಿಸಲು ಐದು ದಿನ ಸಮಯ ತೆಗೆದುಕೊಂಡಿ ದ್ದನ್ನು ನೋಡಿದರೆ, ಭಾರತ ತನ್ನ ಮೂಲಭೂತ ‘ಅಲಿಪ್ತ ನೀತಿ’ಯಿಂದ ದೂರ ಸರಿ ಯುತ್ತಿದೆಯೇನೋ ಎಂಬ ಅನುಮಾನ ಕಾಡದಿರದು.</p><p><em>– ಶಾಂತಕುಮಾರ್, ಸರ್ಜಾಪುರ</em></p><p> ________________</p><p><strong>ಶುಲ್ಕ ಹೆಚ್ಚಳ, ಪಠ್ಯಪುಸ್ತಕಗಳೂ ದುಬಾರಿ!</strong></p><p>ಶಾಲಾ ಪಠ್ಯಪುಸ್ತಕಗಳ ಬೆಲೆ ಹೆಚ್ಚಳದ ಸುದ್ದಿ ಓದಿ ಆಘಾತವಾಯಿತು. ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಕರ್ನಾಟಕ ಪಠ್ಯಪುಸ್ತಕಗಳ ಸಂಘವು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಮಕ್ಕಳಿಗೆ ಭಾರವಾಗದಂತೆ ಬೆಲೆ ಇಳಿಸುವುದು ಒಳಿತು. ಬೆಲೆ ಇಳಿದರೆ ಕಡಿಮೆ ದರ ದಲ್ಲಿ ಪುಸ್ತಕಗಳು ದೊರೆಯುತ್ತವೆ. ಈ ಬಾರಿ ಶೇ 12ರಷ್ಟು ಶಾಲಾ ಶುಲ್ಕ ಹೆಚ್ಚಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಪೋಷಕರು ಅಗತ್ಯವಸ್ತುಗಳ ಬೆಲೆ ಮತ್ತು ಶಾಲಾ ಶುಲ್ಕದ ಹೊರೆ ತಾಳಲಾರದೆ ಬಸವಳಿದಿದ್ದಾರೆ. ಈಗ ಪುಸ್ತಕಗಳ ಬೆಲೆಯನ್ನೂ ಹೆಚ್ಚಿಸಿದರೆ ಅವರಿಗೆ ಮತ್ತಷ್ಟು ಹೊರೆಯಾಗಲಿದೆ. </p><p><em>– ಬಾಲಕೃಷ್ಣ ಎಂ.ಆರ್., ಬೆಂಗಳೂರು</em></p><p>________________</p><p><strong>ಕೆರೆನೀರಿಗೆ ದೊಣೆ ನಾಯಕನ ಅಪ್ಪಣೆಯೆ?</strong></p><p>ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಅಮೆರಿಕವು ಭಾರತಕ್ಕೆ ಮೂವತ್ತು ದಿನಗಳ ತಾತ್ಕಾಲಿಕ ಸಡಿಲಿಕೆ ನೀಡಿದೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ನಮ್ಮ ಅಗತ್ಯಗಳಿಗೆ ನಮ್ಮದೇ ದುಡ್ಡು ಖರ್ಚು ಮಾಡಿ ತೈಲ ಖರೀದಿಸಲು ಮತ್ತೊಬ್ಬರ ಅನುಮತಿಗೆ ಕಾಯಬೇಕಾದ ದುಃಸ್ಥಿತಿ ಏಕೆ? ಭಾರತವು ಸ್ವಾತಂತ್ರ್ಯಗೊಂಡ ಬಳಿಕ ತನ್ನ ವಿದೇಶಾಂಗ ಮತ್ತು ಆರ್ಥಿಕ ನೀತಿಯಲ್ಲಿ ಸ್ವಾಯತ್ತತೆ ಉಳಿಸಿಕೊಳ್ಳಲು ಸದಾ ಪ್ರಯತ್ನಿಸಿದೆ. ಆದರೆ, ಇತ್ತೀಚಿನ ಅಮೆರಿಕದ ನಿರ್ಬಂಧಗಳು ಮತ್ತು ಒತ್ತಡಗಳು ಭಾರತವನ್ನು ಸಂಕಷ್ಟಕರ ಪರಿಸ್ಥಿತಿಗೆ ಹಾಗೂ ಮುಜುಗರಕ್ಕೆ ತಳ್ಳಿವೆ.</p><p>ಪ್ರಜಾಪ್ರಭುತ್ವ ರಾಷ್ಟ್ರವಾಗಿ ದೇಶದ ಆರ್ಥಿಕ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಂತ್ರವಾಗಿ, ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ತೆಗೆದುಕೊಳ್ಳಬೇಕು. ಬೇರೆಯವರ ಕೈಗೊಂಬೆಯಾದರೆ ಭಾರತ ತನ್ನ ಘನತೆ ಕಳೆದುಕೊಂಡಂತೆಯೇ ಸರಿ. ಅಮೆರಿಕದಂತಹ ದೊಡ್ಡ ರಾಷ್ಟ್ರ ಗಳೊಂದಿಗೆ ಸ್ನೇಹಪೂರ್ಣ ಸಂಬಂಧ ಇರಿಸಿಕೊಳ್ಳುವುದು ಅಗತ್ಯ. ಆದರೆ, ಅದೇ ಸಮಯದಲ್ಲಿ ಭಾರತದ ಸಾರ್ವಭೌಮತೆ, ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗಾಸಿಯಾಗದಂತೆ ಜಾಗ್ರತೆವಹಿಸುವುದು ಅತಿಮುಖ್ಯ.</p><p><em>– ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು</em></p><p>________________</p><p><strong>ಬೀದಿನಾಯಿಗಳ ಉಪಟಳ ನಿಯಂತ್ರಿಸಿ</strong></p><p>ಪ್ರತಿದಿನ ಮಾಧ್ಯಮಗಳಲ್ಲಿನ ಸುದ್ದಿ ಗಮನಿಸಿದಾಗ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿರುವುದು ಮನದಟ್ಟಾಗುತ್ತದೆ. ಈಗಾಗಲೇ, ನಾಯಿಗಳ ಹಾವಳಿಯಿಂದ ನಾಗರಿಕರು, ಮಕ್ಕಳು ಅಸುನೀಗಿದ ಉದಾಹರಣೆಗಳಿವೆ. ಚಿಕ್ಕಮಕ್ಕಳನ್ನು ಕಚ್ಚಿ ಎಳೆದೊಯ್ಯುವ ದೃಶ್ಯಗಳು ಕರುಳು ಹಿಂಡುವಂತಿರುತ್ತವೆ.</p><p>ನಾಯಿಗಳ ಹಾವಳಿ ಯಿಂದ ಶಾಲೆಗೆ ಹೋಗುವ ಮಕ್ಕಳಷ್ಟೇ ಭಯಭೀತರಾಗದೆ, ಅವರ ಪೋಷಕರು, ಹಾದಿಹೋಕರು, ವಯೋವೃದ್ಧರು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಪ್ರಾಣಿದಯಾ ಸಂಘದವರು ಅವುಗಳನ್ನು ತಮ್ಮ ಇತಿಮಿತಿಯಲ್ಲಿ ಸಾಕುವುದಾದರೆ ಅವರಿಗೆ ನೀಡುವಂತಾಗಬೇಕು. ಉಳಿದ ನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಸರ್ಕಾರದಿಂದಲೇ ಪೋಷಿಸುವಂತಹ ಕೆಲಸವಾಗಲಿ.</p><p><em>– ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ</em></p><p>________________</p><p><strong>ದೇವದಾಸಿ ಪದ್ಧತಿಯು ಕೊನೆಗೊಳ್ಳಲಿ</strong></p><p>ದೇವದಾಸಿ ಪದ್ಧತಿಯು ಕ್ರೂರ ಹಾಗೂ ಅಮಾನವೀಯ. ದೇವರ ಹೆಸರಿನಲ್ಲಿ ಬಾಲಕಿಯರನ್ನು ದೇವಾಲಯಗಳಿಗೆ ಅರ್ಪಿಸುವ ಈ ಪದ್ಧತಿ, ಅವರ ಬಾಲ್ಯ, ಶಿಕ್ಷಣ ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಕಾನೂನಿನಿಂದ ನಿಷೇಧಗೊಂಡಿದ್ದರೂ, ಸಾಮಾಜಿಕ ಒತ್ತಡ ಮತ್ತು ಅಜ್ಞಾನದಿಂದಾಗಿ ಈ ಪದ್ಧತಿ ಗುಪ್ತವಾಗಿ ಮುಂದುವರಿದಿದೆ. ಹೆಣ್ಣುಮಕ್ಕಳನ್ನು ದೇವರಿಗೆ ಅರ್ಪಿಸುವುದು ಧರ್ಮವಲ್ಲ, ಅದು ಶೋಷಣೆ ಹಾಗೂ ಮೌಢ್ಯ. ಇದರ ನಿಗ್ರಹಕ್ಕೆ ಕಾನೂನು ಮಾತ್ರ ಸಾಲದು; ಜಾಗೃತಿ ಮತ್ತು ಶಿಕ್ಷಣದ ಮೂಲಕ ಸಮಾಜದ ಮನಃಸ್ಥಿತಿ ಯನ್ನು ಬದಲಾಯಿಸಬೇಕಿದೆ. ಸಂಘಟಿತ ಪ್ರಯತ್ನದಿಂದ ಈ ಅನಿಷ್ಟ ಪದ್ಧತಿಯ ನಿರ್ಮೂಲನೆ ಸಾಧ್ಯ.</p><p><em>– ಎಚ್. ನಾಗಮ್ಮ ಭಂಡಾರ್, ಹೊಸಪೇಟೆ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿದ್ಯುತ್ ಕಣ್ಣಾಮುಚ್ಚಾಲೆ: ರೈತರ ಸಂಕಟ</strong></p><p>ರೈತರಿಗೆ ಸಮರ್ಪಕವಾಗಿ ತ್ರಿಪೇಸ್ ವಿದ್ಯುತ್ ನೀಡುವುದರಲ್ಲಿ ರಾಜ್ಯ ಸರ್ಕಾರ ಎಡವಿದೆ. ವಿದ್ಯುತ್ ಪೂರೈಕೆಯಲ್ಲಿನ ಅಸ್ತವ್ಯಸ್ತತೆಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಕೃಷಿ ಪಂಪ್ಸೆಟ್ಗಳಿಗೆ ಹೆಚ್ಚಾಗಿ ರಾತ್ರಿವೇಳೆ ವಿದ್ಯುತ್ ನೀಡಲಾಗುತ್ತದೆ. ಜಮೀನುಗಳಿಗೆ ತೆರಳುವ ರೈತರು ವಿಷಜಂತುಗಳ ಹಾವಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.</p><p>ರೈತ ಮೃತಪಟ್ಟರೆ ಆತನ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ರಾತ್ರಿವೇಳೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾದರೆ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರವೂ ದೊರೆಯುವುದಿಲ್ಲ. ಹಗಲಿನ ಹೊತ್ತು ವಿದ್ಯುತ್ ಪೂರೈಸುವುದೇ ಈ ಸಮಸ್ಯೆಗಿರುವ ಏಕೈಕ ಪರಿಹಾರ. ರೈತರ ಹಿತದೃಷ್ಟಿಯಿಂದ ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಈ ದಿಸೆಯಲ್ಲಿ ಹೆಜ್ಜೆ ಇಡಲಿ.</p><p><em>– ಷಣ್ಮುಖ ಎಸ್.ಎಚ್., ದಾವಣಗೆರೆ</em></p><p> ________________</p><p><strong>ಅಲಿಪ್ತ ನೀತಿ: ವಿದಾಯ ಹೇಳಲಾಗಿದೆಯೆ?</strong></p><p>ಭಾರತದ ವಿದೇಶಾಂಗ ನೀತಿಯು ಜನಸಾಮಾನ್ಯರಿಗೆ ಅರ್ಥವಾಗಬೇಕು; ಅದರ ಆಳ ಅಗಲವನ್ನು ಸರ್ಕಾರ ದೇಶಕ್ಕೆ ತಿಳಿಸಬೇಕೆಂದು ನಾಗರಿಕರು ಬಯಸುವುದಿಲ್ಲ. ಆದರೆ, ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳನ್ನು ಉಲ್ಲೇಖಿಸಬಹುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಬೆನ್ನಲ್ಲೇ ಇರಾನ್ನ ಪರಮೋಚ್ಚನಾಯಕ ಅಯಾತೊಲ್ಲಾ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ಸೇರಿ ಹತ್ಯೆ ಮಾಡಿವೆ. ಅದಕ್ಕಾಗಿ ಸಂತಾಪ ಸೂಚಿಸಲು ಐದು ದಿನ ಸಮಯ ತೆಗೆದುಕೊಂಡಿ ದ್ದನ್ನು ನೋಡಿದರೆ, ಭಾರತ ತನ್ನ ಮೂಲಭೂತ ‘ಅಲಿಪ್ತ ನೀತಿ’ಯಿಂದ ದೂರ ಸರಿ ಯುತ್ತಿದೆಯೇನೋ ಎಂಬ ಅನುಮಾನ ಕಾಡದಿರದು.</p><p><em>– ಶಾಂತಕುಮಾರ್, ಸರ್ಜಾಪುರ</em></p><p> ________________</p><p><strong>ಶುಲ್ಕ ಹೆಚ್ಚಳ, ಪಠ್ಯಪುಸ್ತಕಗಳೂ ದುಬಾರಿ!</strong></p><p>ಶಾಲಾ ಪಠ್ಯಪುಸ್ತಕಗಳ ಬೆಲೆ ಹೆಚ್ಚಳದ ಸುದ್ದಿ ಓದಿ ಆಘಾತವಾಯಿತು. ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಕರ್ನಾಟಕ ಪಠ್ಯಪುಸ್ತಕಗಳ ಸಂಘವು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಮಕ್ಕಳಿಗೆ ಭಾರವಾಗದಂತೆ ಬೆಲೆ ಇಳಿಸುವುದು ಒಳಿತು. ಬೆಲೆ ಇಳಿದರೆ ಕಡಿಮೆ ದರ ದಲ್ಲಿ ಪುಸ್ತಕಗಳು ದೊರೆಯುತ್ತವೆ. ಈ ಬಾರಿ ಶೇ 12ರಷ್ಟು ಶಾಲಾ ಶುಲ್ಕ ಹೆಚ್ಚಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಪೋಷಕರು ಅಗತ್ಯವಸ್ತುಗಳ ಬೆಲೆ ಮತ್ತು ಶಾಲಾ ಶುಲ್ಕದ ಹೊರೆ ತಾಳಲಾರದೆ ಬಸವಳಿದಿದ್ದಾರೆ. ಈಗ ಪುಸ್ತಕಗಳ ಬೆಲೆಯನ್ನೂ ಹೆಚ್ಚಿಸಿದರೆ ಅವರಿಗೆ ಮತ್ತಷ್ಟು ಹೊರೆಯಾಗಲಿದೆ. </p><p><em>– ಬಾಲಕೃಷ್ಣ ಎಂ.ಆರ್., ಬೆಂಗಳೂರು</em></p><p>________________</p><p><strong>ಕೆರೆನೀರಿಗೆ ದೊಣೆ ನಾಯಕನ ಅಪ್ಪಣೆಯೆ?</strong></p><p>ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಅಮೆರಿಕವು ಭಾರತಕ್ಕೆ ಮೂವತ್ತು ದಿನಗಳ ತಾತ್ಕಾಲಿಕ ಸಡಿಲಿಕೆ ನೀಡಿದೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ನಮ್ಮ ಅಗತ್ಯಗಳಿಗೆ ನಮ್ಮದೇ ದುಡ್ಡು ಖರ್ಚು ಮಾಡಿ ತೈಲ ಖರೀದಿಸಲು ಮತ್ತೊಬ್ಬರ ಅನುಮತಿಗೆ ಕಾಯಬೇಕಾದ ದುಃಸ್ಥಿತಿ ಏಕೆ? ಭಾರತವು ಸ್ವಾತಂತ್ರ್ಯಗೊಂಡ ಬಳಿಕ ತನ್ನ ವಿದೇಶಾಂಗ ಮತ್ತು ಆರ್ಥಿಕ ನೀತಿಯಲ್ಲಿ ಸ್ವಾಯತ್ತತೆ ಉಳಿಸಿಕೊಳ್ಳಲು ಸದಾ ಪ್ರಯತ್ನಿಸಿದೆ. ಆದರೆ, ಇತ್ತೀಚಿನ ಅಮೆರಿಕದ ನಿರ್ಬಂಧಗಳು ಮತ್ತು ಒತ್ತಡಗಳು ಭಾರತವನ್ನು ಸಂಕಷ್ಟಕರ ಪರಿಸ್ಥಿತಿಗೆ ಹಾಗೂ ಮುಜುಗರಕ್ಕೆ ತಳ್ಳಿವೆ.</p><p>ಪ್ರಜಾಪ್ರಭುತ್ವ ರಾಷ್ಟ್ರವಾಗಿ ದೇಶದ ಆರ್ಥಿಕ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಂತ್ರವಾಗಿ, ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ತೆಗೆದುಕೊಳ್ಳಬೇಕು. ಬೇರೆಯವರ ಕೈಗೊಂಬೆಯಾದರೆ ಭಾರತ ತನ್ನ ಘನತೆ ಕಳೆದುಕೊಂಡಂತೆಯೇ ಸರಿ. ಅಮೆರಿಕದಂತಹ ದೊಡ್ಡ ರಾಷ್ಟ್ರ ಗಳೊಂದಿಗೆ ಸ್ನೇಹಪೂರ್ಣ ಸಂಬಂಧ ಇರಿಸಿಕೊಳ್ಳುವುದು ಅಗತ್ಯ. ಆದರೆ, ಅದೇ ಸಮಯದಲ್ಲಿ ಭಾರತದ ಸಾರ್ವಭೌಮತೆ, ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗಾಸಿಯಾಗದಂತೆ ಜಾಗ್ರತೆವಹಿಸುವುದು ಅತಿಮುಖ್ಯ.</p><p><em>– ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು</em></p><p>________________</p><p><strong>ಬೀದಿನಾಯಿಗಳ ಉಪಟಳ ನಿಯಂತ್ರಿಸಿ</strong></p><p>ಪ್ರತಿದಿನ ಮಾಧ್ಯಮಗಳಲ್ಲಿನ ಸುದ್ದಿ ಗಮನಿಸಿದಾಗ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿರುವುದು ಮನದಟ್ಟಾಗುತ್ತದೆ. ಈಗಾಗಲೇ, ನಾಯಿಗಳ ಹಾವಳಿಯಿಂದ ನಾಗರಿಕರು, ಮಕ್ಕಳು ಅಸುನೀಗಿದ ಉದಾಹರಣೆಗಳಿವೆ. ಚಿಕ್ಕಮಕ್ಕಳನ್ನು ಕಚ್ಚಿ ಎಳೆದೊಯ್ಯುವ ದೃಶ್ಯಗಳು ಕರುಳು ಹಿಂಡುವಂತಿರುತ್ತವೆ.</p><p>ನಾಯಿಗಳ ಹಾವಳಿ ಯಿಂದ ಶಾಲೆಗೆ ಹೋಗುವ ಮಕ್ಕಳಷ್ಟೇ ಭಯಭೀತರಾಗದೆ, ಅವರ ಪೋಷಕರು, ಹಾದಿಹೋಕರು, ವಯೋವೃದ್ಧರು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಪ್ರಾಣಿದಯಾ ಸಂಘದವರು ಅವುಗಳನ್ನು ತಮ್ಮ ಇತಿಮಿತಿಯಲ್ಲಿ ಸಾಕುವುದಾದರೆ ಅವರಿಗೆ ನೀಡುವಂತಾಗಬೇಕು. ಉಳಿದ ನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಸರ್ಕಾರದಿಂದಲೇ ಪೋಷಿಸುವಂತಹ ಕೆಲಸವಾಗಲಿ.</p><p><em>– ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ</em></p><p>________________</p><p><strong>ದೇವದಾಸಿ ಪದ್ಧತಿಯು ಕೊನೆಗೊಳ್ಳಲಿ</strong></p><p>ದೇವದಾಸಿ ಪದ್ಧತಿಯು ಕ್ರೂರ ಹಾಗೂ ಅಮಾನವೀಯ. ದೇವರ ಹೆಸರಿನಲ್ಲಿ ಬಾಲಕಿಯರನ್ನು ದೇವಾಲಯಗಳಿಗೆ ಅರ್ಪಿಸುವ ಈ ಪದ್ಧತಿ, ಅವರ ಬಾಲ್ಯ, ಶಿಕ್ಷಣ ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಕಾನೂನಿನಿಂದ ನಿಷೇಧಗೊಂಡಿದ್ದರೂ, ಸಾಮಾಜಿಕ ಒತ್ತಡ ಮತ್ತು ಅಜ್ಞಾನದಿಂದಾಗಿ ಈ ಪದ್ಧತಿ ಗುಪ್ತವಾಗಿ ಮುಂದುವರಿದಿದೆ. ಹೆಣ್ಣುಮಕ್ಕಳನ್ನು ದೇವರಿಗೆ ಅರ್ಪಿಸುವುದು ಧರ್ಮವಲ್ಲ, ಅದು ಶೋಷಣೆ ಹಾಗೂ ಮೌಢ್ಯ. ಇದರ ನಿಗ್ರಹಕ್ಕೆ ಕಾನೂನು ಮಾತ್ರ ಸಾಲದು; ಜಾಗೃತಿ ಮತ್ತು ಶಿಕ್ಷಣದ ಮೂಲಕ ಸಮಾಜದ ಮನಃಸ್ಥಿತಿ ಯನ್ನು ಬದಲಾಯಿಸಬೇಕಿದೆ. ಸಂಘಟಿತ ಪ್ರಯತ್ನದಿಂದ ಈ ಅನಿಷ್ಟ ಪದ್ಧತಿಯ ನಿರ್ಮೂಲನೆ ಸಾಧ್ಯ.</p><p><em>– ಎಚ್. ನಾಗಮ್ಮ ಭಂಡಾರ್, ಹೊಸಪೇಟೆ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>