ನಾಗರಿಕರು ಅಗತ್ಯ ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, 50 ಸೇವೆಗಳನ್ನು ಮನೆಬಾಗಿಲಿಗೆ ಒದಗಿಸುವ ‘ಜನಸೇವಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದನ್ನು ನೋಡಿ(ಪ್ರ.ವಾ., ಜ. 25) ಆಶ್ಚರ್ಯವಾಯಿತು.ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿಅಲೆದರೂಆಗದಕೆಲಸವು ಮನೆ ಬಾಗಿಲಿನಲ್ಲಿಆಗುತ್ತದೆಎಂದರೆನಂಬುವುದುಕಷ್ಟ.ಇಂತಹಕಾರ್ಯಕ್ರಮಗಳುಕೇವಲಪ್ರಯೋಗಾರ್ಥವಾಗಿ ಮತ್ತು ಪ್ರಚಾರ ಪಡೆಯುವ ಸಲುವಾಗಿ ಜಾರಿಗೆ ತರುವ ಕಾರ್ಯಕ್ರಮಗಳು ಎಂದು ಜನಸಾಮಾನ್ಯರಿಗೆ ಅನ್ನಿಸಬಹುದೇ ಹೊರತು ಉಪಯೋಗವಾಗಬಹುದು ಎಂಬುದರಲ್ಲಿ ನಂಬಿಕೆಇಲ್ಲ.ಇದರಬದಲು, ಇಲಾಖೆಗಳಲ್ಲಿ ದಕ್ಷತೆಗೆಒತ್ತುಕೊಟ್ಟರೆಸಾರ್ವಜನಿಕರಿಗೆ ಹೆಚ್ಚು ಉಪಯೋಗ ಆಗಬಹುದು.