ಅಪೌಷ್ಟಿಕತೆಯನ್ನು ನಿವಾರಿಸಲು ಹೆಚ್ಚಿನ ಅನುದಾನ, ಅದರ ಸದ್ಬಳಕೆಗೆ ವಿಶೇಷ ಕಾಳಜಿ ಬೇಕು. ಯೋಜನೆಗಳ ಪರಿಣಾಮಕಾರಿ ಜಾರಿ ಜೊತೆಗೆ ಜನಜಾಗೃತಿಯ ಆಗತ್ಯವೂ ಇದೆ. ಜವಾಬ್ದಾರಿ ಇರುವ ಪ್ರತಿಯೊಬ್ಬರೂ ಈ ಬಗ್ಗೆ ಆಲೋಚಿಸಿ ನಮ್ಮ ಮಕ್ಕಳು ಮತ್ತು ಮಹಿಳೆಯರ ಉಳಿವಿಗಾಗಿ ಶ್ರಮಿಸಿ, ಅಪೌಷ್ಟಿಕತೆಯನ್ನು ದೂರ ಮಾಡಬೇಕಾಗಿದೆ.
-ಶಿವಕುಮಾರ ಮ್ಯಾಗಳಮನಿ, ಕವಿತಾಳ, ರಾಯಚೂರು