ಇಂತಹ ಸಮಸ್ಯೆಗಳ ಕುರಿತು ಇತ್ತೀಚೆಗೆ ಕೆಲ ಸ್ನೇಹಿತರ ಜೊತೆಗೆ ಚರ್ಚೆ ನಡೆಸಿದ ವೇಳೆ, ಬೆಲೆ ಏರಿಕೆ ಕುರಿತು ಅವರಲ್ಲಿ ಒಬ್ಬ, ‘ಆಹಾರ ಸಾಮಗ್ರಿಗಳ ಬೆಲೆಯಲ್ಲಿನ ಹೆಚ್ಚಳವು ನಮಗೆ ಸ್ವಲ್ಪ ಕಷ್ಟವಾದರೂ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದ. ಈ ಉತ್ತರ ನನ್ನನ್ನು ದಿಗ್ಭ್ರಮೆಗೊಳಿಸಿತು. ‘ದೇಶ ಮೊದಲಾ ಅಥವಾ ದೇಶದ ಜನತೆ ಮೊದಲಾ? ಜನರಿಲ್ಲದೆ ರಾಷ್ಟ್ರ ಹೇಗೆ ಅಸ್ತಿತ್ವದಲ್ಲಿರಲು ಸಾಧ್ಯ’ ಎಂಬ ನನ್ನ ಪ್ರಶ್ನೆಗೆ ಅವನ ಉತ್ತರ ನಿರೀಕ್ಷಿಸಿದ ಹಾಗೆ ಸಮರ್ಥನೆಯಲ್ಲೇ ಕೊನೆಯಾಯಿತು. ವಿಪರ್ಯಾಸವೆಂದರೆ, ಈಗಿನ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿದರೆ, ಹಿಂದಿನ ಸರ್ಕಾರಗಳ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ. ಈ ಸಮರ್ಥನೆ
ಗಳಿಗೆ ಕೊನೆಯಿದೆಯೇ?