ಸರಿಯೇ. ಆದರೆ ಈ ರೀತಿ ಬರೀ ಪ್ರಶ್ನಿಸಿದರೆ ಅಥವಾ ಸವಾಲು ಹಾಕಿದರೆ ಅಲ್ಲಿಗೆ ಇವರ ಜವಾಬ್ದಾರಿ ಮುಗಿಯಿತೇ? ಇವರು ಕೂಡ ಬೀದಿಗಿಳಿದು ಬೆಲೆ ಏರಿಕೆ ವಿರುದ್ಧ ಜನಪರವಾಗಿ ಹೋರಾಡಬೇಕು ತಾನೆ? ಆ ಕೆಲಸ ಆಗುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ಇವರ ಮೇಲೆ ವಿಶ್ವಾಸವೇ ಇಲ್ಲದಂತಾಗಿದೆ. ಬಿಜೆಪಿ ಈಗಾಗಲೇ ಬೂತ್ ಮಟ್ಟದಲ್ಲಿ ಚುನಾವಣಾ ತಯಾರಿ ನಡೆಸಿರುವಾಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬರೀ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿವೆ. ಹೀಗಾಗಿ, ಆಳುವ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೇ ಇದೆ. ಬಡವರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.