ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಟಿಕೆಟ್ಗಾಗಿ ಒತ್ತಡ, ಬೆದರಿಕೆ. ವಿಧಾನಸಭೆಗೆ ಆಯ್ಕೆಯಾದ ಬಳಿಕ ಮಂತ್ರಿಪದವಿಗಾಗಿ ಒತ್ತಡ, ಮಂತ್ರಿ ಪದವಿ ಕೊಡದಿದ್ದರೆ ಪಕ್ಷ ಬಿಡುವ ಬೆದರಿಕೆ. ಮಂತ್ರಿಪದವಿ ಗಿಟ್ಟಿಸಿಕೊಂಡ ಮೇಲೆ ತಾವು ಕೇಳಿದ ಖಾತೆಯೇ ಬೇಕೆಂಬ ಒತ್ತಡ, ಅದು ನೀಡದಿದ್ದರೆ ರಾಜೀನಾಮೆಯ ಬೆದರಿಕೆ...
ಕರ್ನಾಟಕದ ವಿಧಾನಸಭೆಯ ಚುನಾವಣೆ ಘೋಷಣೆಯಾದಂದಿನಿಂದ ಇಂದಿನವರೆಗೆ ಇವೇ ಸುದ್ದಿಗಳನ್ನು ಓದುತ್ತಾ ಇದ್ದೇವೆ. ಚುನಾಯಿತ ಪ್ರತಿನಿಧಿಗಳ ಆದ್ಯತೆ ಏನು ಎಂದು ಕೇಳುವ ಹಕ್ಕು ಮತದಾರರಿಗೆ ಇದೆಯೇ? ತಾವು ಆರಿಸಿಬಂದ ಕ್ಷೇತ್ರದ ಮತದಾರರೊಂದಿಗೆ ಕೆಲವೊಂದು ಕಡೆ ಮುಕ್ತ ಸಂವಾದಕ್ಕೆ ನಮ್ಮ ಪ್ರತಿನಿಧಿಗಳು ಯಾಕೆ ಮುಂದಾಗಬಾರದು?